NewsNews In KannadaNorth Karnataka

ಡಿಡಿಪಿಐ ಬಿಇಓರಿಂದ ಕ್ಯಾರಕೊಪ್ಪ ಶಾಲೆಯಲ್ಲಿ ಜಿಲ್ಲಾ ಮಟ್ಟದ ಶಾಲಾ ಸ್ವಚ್ಛತಾ ಕಾರ್ಯಕ್ರಮ

ಧಾರವಾಡ ಮೇ.15: ನಾಳೆ, ಮೇ 16 ರಿಂದ 2022-23 ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಸಿದ್ಧತೆಗಾಗಿ ಕ್ಯಾರಕೊಪ್ಪದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ/ತಾಲೂಕ ಮಟ್ಟದ ಶಾಲಾ ಸ್ವಚ್ಛತಾ ಕಾರ್ಯಕ್ರಮವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿತ್ತು.

ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್.ಕೆಳದಿಮಠ ಧಾರವಾಡ ಗ್ರಾಮೀಣ ಬಿಇಓ ಉಮೇಶ ಬಮ್ಮಕ್ಕನವರ ಶಹರ ಬಿಇಓ ಗಿರೀಶ ಪದಕಿ,ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಗ್ರಾಮ ಪಂಚಾಯತ ಅಧ್ಯಕ್ಷ ಶಿವಾನಂದ ಬೇಲೂರ,ಶಾಲಾ ಸುಧಾರಣೆ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಮೌಲಾಸಾಬ ಹೊರಓಣಿ,ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗುರು ತಿಗಡಿ, ಪ್ರಧಾನ ಕಾರ್ಯದರ್ಶಿ ಶಂಕರಪ್ಪ ಘಟ್ಟಿ, ಎಸ್‌ಡಿಎಂಸಿ ಸದಸ್ಯ ಚನಬಸಪ್ಪ ಕಲಕಣ್ಣಿ, ಕ್ಯಾರಕೊಪ್ಪದ ಕನ್ನಡ ಮತ್ತು ಉರ್ದು ಶಾಲಾ ಶಿಕ್ಷಕರ ವೃಂದ,ಅಡುಗೆ ಸಿಬ್ಬಂದಿ ವರ್ಗದವರು ಭಾಗವಹಿಸಿ ಶ್ರಮದಾನ ಮಾಡಿ ಶಾಲಾ ಆವರಣದಲ್ಲಿರುವ ಕಸ ಕಡ್ಡಿ ತೆಗೆದು ಸ್ವಚ್ಛಗೊಳಿಸಿದರು.

Please follow and like us:

Leave a Reply

Your email address will not be published.

Back to top button
Close