NewsNews In Kannada

ಶಾಲೆಗಳ ಸೌಂದರ್ಯ ಹೆಚ್ಚಿಸಲು ಸಮಾಜದ ಕೊಡುಗೆ ಮುಖ್ಯ: ಚನ್ನಪ್ಪಗೌಡ್ರ

ಹುಬ್ಬಳ್ಳಿ, ಜು.9: ಸರ್ಕಾರಿ ಶಾಲೆಗಳ ಸೌಂದರ್ಯವನ್ನು ಹೆಚ್ವಿಸುವಲ್ಲಿ ಸಮಾಜದ ಕೊಡುಗೆ ತುಂಬಾ ಮುಖ್ಯವಾಗಿದೆ ಎಂದು ಹುಬ್ಬಳ್ಳಿ ಶಹರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಚನ್ನಪ್ಪಗೌಡ್ರ ಹೇಳಿದರು.

ಇಂದು ಹೊಸುರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.16 ರಲ್ಲಿ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಾಲೆಗೆ ಗೇಟ್ ಹಾಗೂ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿರುವುದು ಸ್ವಾಗತಾರ್ಹ ಸಂಗತಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಶಾಲೆಗೆ ಗೇಟ್ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ ಸುರೇಶ ಬಾಬುರಾವ್ ದಳವಿ ಮತ್ತು ಬಸವರಾಜ ಅವಣ್ಣನವರ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾದ ಜಿ.ಸಿ.ಕೋಲಕಾರ, ಜೆ.ಎನ್.ಕಳ್ಳಿಮನಿ, ಎಲ್.ಬಿ.ಧನ್ನಕನವರ, ಎಸ್‌‌ಡಿಎಂಸಿ ಅಧ್ಯಕ್ಷರಾದ ಚಾಕಲಬ್ಬಿ ಸೇರಿದಂತೆ ಶಾಲಾ ಶಿಕ್ಷಕರು, ಸಿಬ್ಬಂದಿ ಹಾಜರಿದ್ದರು.

ಜ್ಯೋತಿ ಚಿಕ್ಕೆರೂರು ನಿರೂಪಿಸಿದರು. ರೂಪಾ ರೇವಣಕರ ಸ್ವಾಗತಿಸಿದರು. ಶಾಲಿನಿ‌ ಸಿಂಧೆ ವಂದಿಸಿದರು.

Please follow and like us:

Leave a Reply

Your email address will not be published.

Back to top button
Close