KarnatakaNews In Kannada

ಹೊಸಯಲ್ಲಾಪುರದಲ್ಲಿ ಧಾರ್ಮಿಕ ದತ್ತಿ ದಿನಾಚರಣೆ

ಧಾರವಾಡ, ಏ.04: ಜಿಲ್ಲಾಡಳಿತ, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಸಹಯೋಗದಲ್ಲಿ ಚಾಂದ್ರಮಾನ ಯುಗಾದಿ ಅಂಗವಾಗಿ ಶನಿವಾರ (ಏಪ್ರಿಲ್ 2) ರಂದು ರಾಜ್ಯ ಧಾರ್ಮಿಕ ದಿನಾಚರಣೆ ಕಾರ್ಯಕ್ರಮವನ್ನು ಹೊಸಯಲ್ಲಾಪುರದ ಕಸಬಾ ದ್ಯಾಮವ್ವ ಹಾಗೂ ದುರ್ಗಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಜರುಗಿತು.

ಮುರುಘಾಮಠದ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಶಾಸಕ ಅಮೃತ ದೇಸಾಯಿ, ಜಿಲ್ಲಾಧಿಕಾರಿ ನಿತೇಶ್ .ಕೆ.ಪಾಟೀಲ ಅವರು ಗೋ ಪೂಜೆ ಹಾಗೂ ಮಹಾದ್ವಾರ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.

ಮಹಾನಗರಪಾಲಿಕೆ ಸದಸ್ಯರಾದ ಈರೇಶ್ ಅಂಚಟಗೇರಿ, ಶಂಭು ಸಾಲ್ಮನಿ, ಶಂಕರ ಶೇಳಕೆ ಸೇರಿದಂತೆ ದೇವಸ್ಥಾನದ ಟ್ರಸ್ಟ್ ಸದಸ್ಯರು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Please follow and like us:

Leave a Reply

Your email address will not be published.

Back to top button
Close