ಹೆಚ್ಡಿಬಿಆರ್ಟಿಎಸ್ ವ್ಯವಸ್ಥಾಪಕ ನಿರ್ದೇಶಕರಾಗಿ ಸಾವಿತ್ರಿ ಬಿ.ಕಡಿ ಅಧಿಕಾರ ಸ್ವೀಕಾರ
ಹುಬ್ಬಳ್ಳಿ, ಅ.23: ಹುಬ್ಬಳ್ಳಿ ಧಾರವಾಡ ಬಸ್ ರಾಪಿಡ್ ಸಿಸ್ಟಮ್ (ಹೆಚ್ಡಿಬಿಆರ್ಟಿಎಸ್)ನ ವ್ಯವಸ್ಥಾಪಕ ನಿರ್ದೇಶಕರಾಗಿ ಸಾವಿತ್ರಿ ಬಿ.ಕಡಿ ಅವರು ಅಧಿಕಾರ ಸ್ವೀಕರಿಸಿದರು.
ಈ ಹಿಂದೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಪ್ರಿಯಾಂಗ ಎಂ. ಅವರು ಹೆಚ್ಚುವರಿ ಪ್ರಭಾರ ವಹಿಸಿಕೊಂಡಿದ್ದರು. ಕರ್ನಾಟಕ ಸರ್ಕಾರ ಖಾಲಿ ಇರುವ ಹುದ್ದೆಗೆ ಸಾವಿತ್ರಿ ಬಿ. ಕಡಿ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.
ಸಾವಿತ್ರಿ ಬಿ.ಕಡಿ ಅವರಿಗೆ ಹೆಚ್ಡಿಬಿಆರ್ಟಿಎಸ್ನ ವಿಶೇಷ ಭೂಸ್ವಾಧೀನಾಧಿಕಾರಿ ಗೀತ ಹೊನಕೇರಿ ಅವರು ಸಸಿ ನೀಡಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಪ್ರಧಾನ ವ್ಯವಸ್ಥಾಪಕರಾದ ರಮೇಶ್ ಗುಡ್ಡರಡ್ಡಿ, ರಾಜಕುಮಾರ .ಎಮ್ ಉಪಸ್ಥಿತರಿದ್ದರು.
ಹುಬ್ಬಳ್ಳಿ ( ಕರ್ನಾಟಕ ವಾರ್ತೆ) ಅ.23: ಹುಬ್ಬಳ್ಳಿ ಧಾರವಾಡ ಬಸ್ ರಾಪಿಡ್ ಸಿಸ್ಟಮ್ (ಹೆಚ್ಡಿಬಿಆರ್ಟಿಎಸ್)ನ ವ್ಯವಸ್ಥಾಪಕ ನಿರ್ದೇಶಕರಾಗಿ ಸಾವಿತ್ರಿ ಬಿ.ಕಡಿ ಅವರು ಅಧಿಕಾರ ಸ್ವೀಕರಿಸಿದರು.
ಈ ಹಿಂದೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಪ್ರಿಯಾಂಗ ಎಂ. ಅವರು ಹೆಚ್ಚುವರಿ ಪ್ರಭಾರ ವಹಿಸಿಕೊಂಡಿದ್ದರು. ಕರ್ನಾಟಕ ಸರ್ಕಾರ ಖಾಲಿ ಇರುವ ಹುದ್ದೆಗೆ ಸಾವಿತ್ರಿ ಬಿ. ಕಡಿ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.
ಸಾವಿತ್ರಿ ಬಿ.ಕಡಿ ಅವರಿಗೆ ಹೆಚ್ಡಿಬಿಆರ್ಟಿಎಸ್ನ ವಿಶೇಷ ಭೂಸ್ವಾಧೀನಾಧಿಕಾರಿ ಗೀತ ಹೊನಕೇರಿ ಅವರು ಸಸಿ ನೀಡಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಪ್ರಧಾನ ವ್ಯವಸ್ಥಾಪಕರಾದ ರಮೇಶ್ ಗುಡ್ಡರಡ್ಡಿ, ರಾಜಕುಮಾರ .ಎಮ್ ಉಪಸ್ಥಿತರಿದ್ದರು